ವಿನಯ್ ...
ಅಂತೂ " ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ..." ಅನ್ನುವ ನುಡಿಯಂತೆ ನಮ್ಮ ಬಿ.ಜೆ.ಪಿ ಸರ್ಕಾರದ "ಅಂತರಿಕ ಜಗಳ..." "ದಿಲ್ಲಿಗೆ ಹೋಗಿ ಗಣಿದೊರೆಗಳ ಜೊತೆ ರಾಜಿಯಾಗುವ ತನಕ..." ಎಂಬಂತಾಗಿದೆ...! ಸರಿ ಸುಮಾರು ಕೆಲವು ವಾರಗಳ ವರೆಗೆ ನೆಡೆದ "ಅಂತರಿಕ ಯುದ್ಧ" ಅಂತೂ ಅಡ್ವಾಣಿಯರ ಹುಟ್ಟುಹಬ್ಬದ ದಿನ ಸಮಾಪ್ತಿಗೊಂಡಿದ್ದು ( ನಮಗೆ ಕಾಣಿಸುವಂತೆ...!) ಪಾಪ ಅಡ್ವಾಣಿ ಯವರಿಗೆ "ಅಮೃತ" ಕುಡಿದಷ್ಟೇ ಸಂತೋಷವಾಗಿರಬಹುದು...! ಬಹಳ ದಿನ ನಮ್ಮ ರಾಜ್ಯದ ಮು.ಮ ಮತ್ತು ಬಿ.ಜೆ.ಪಿ ಯ ಅಧ್ಯಕ್ಷರು/ಹಿರಿಯ ನಾಯಕರು ತಮ್ಮ ತಲೆ ಕೆರೆದು-ಕೆರೆದು...(ಮುಂಗಾರು ಮಳೆಯ ಗಣೇಶ್ ಹೇಳಿದಂತೆ ಅದು ಹುಣ್ಣಾಗಿ ಮತ್ತೇನೋ ಅಗಲಿಲ್ಲ... ಅವರ ಪುಣ್ಯ...!) ಎಲ್ಲಿ ಕಮಲ ಗಣಿಯ ಆಳದಲ್ಲಿ ಹುದುಗಿಹೋಗುವುದೋ ಎಂಬ ಭಯ ತಾತ್ಕಲಿಕವಾಗಿ ಸಲ್ಪ ಕಮ್ಮಿಯಾಗಿದೆ ಎನಿಸಿ ಸರ್ವ ಬಿ.ಜೆ.ಪಿ "ಬಂಧು" ಗಳು ಮಾಧ್ಯಮದವರ ಮುಂದೆ ಕೇಕ್ ಸವಿಯುವದೊಂದಿಗೆ ( ಅದರಲ್ಲಿ ಮೊಟ್ಟೆ ಇತ್ತೋ, ಅಥವಾ ಪ್ಯೂರ್ ವೆಜಿಟೇರ್ಯನ್ ಕೇಕೊ ನನಗಂತೂ ಗೊತ್ತಿಲ್ಲ ಪ... ) ಮುಕ್ತಾಯಗೊಳಿಸಿದರು...!

ಪರಸ್ಪರ ಕೈ ಮೇಲೆತ್ತಿ ಹಿಡಿದು "ಹಮ್ ಸಾತ್ ಸಾತ್ ಹೇ.." (ಅಲ್ಲಿ ಕೇವಲ ೪-೫ ಜನ ಇದ್ದರಷ್ಟೇ...!) ಎಂದು ಮುಗುಳ್ನಕ್ಕರು.... ನಮ್ಮ ಮು.ಮ ಅವರ ಮುಖದ ಮೇಲಿನ ನಗು ನೋಡಿ ಬಿ.ಜೆ.ಪಿ ಯ ನಿಷ್ಟಾವಂತ ಜನರಿಗಿಂತ ನಮ್ಮ ಬಡಪಾಯಿ ಕರುನಾಡು ಜನರು ತುಂಬ ಸಂತಸಪಟ್ಟಿರುವರು ಎಂದು ನನ್ನ ಅನಿಸಿಕೆ...! ಏಕೆಂದರೆ ಕೆಲವು ದಿನಗಳಿಂದ ತೀರ್ಥಕ್ಷೇತ್ರಗಳಿಗೆ ತೆರಳಿ, ಎಲ್ಲಾ ದೇವರನ್ನು "ನನ್ನನ್ನು ಕಾಪಾಡಪ್ಪ" ಎಂದು ಬೇಡಿ, ಇತ್ತ ಮಾಧ್ಯಮದವರ ಮುಂದೆ ಕಣ್ಣಲ್ಲಿ ನೀರು ತರಿಸಿಕೊಂಡು ತಮ್ಮ ದುರ್ದಿನಗಳ ಬಗ್ಗೆ ನೆನೆದು ದುಖಿ:ಸುತ್ತಿದ್ದಾಗ ಅಂತೂ ೭ನೇ ತಾರೀಕಿನ ಭಾನುವಾರ ( ಅದರಲ್ಲೂ ಬಿ.ಜೆ.ಪಿ ಯ ಹಿರಿಯ ನಾಯಕನ ಜನ್ಮದಿನದಂದು...) ಅವರಿಗೆ "ಶುಭ ಭಾನುವಾರ" ವಾಗಿ ಪರಿಗಮಿಸಿದ್ದು ಎನೋ ನಮ್ಮ ಮು.ಮ ಅವರು ಇಂದಿನ ಜನ್ಮದಲ್ಲಿ ( ಸಾರಿ, ಹಿಂದಿನ ಜನ್ಮದಲ್ಲಿ...) ಮಾಡಿದ ಯಾವುದೋ ಸತ್ಕಾರ್ಯದ ಫಲವಿರಬಹುದು...! ಹಾಗೇ ನಮ್ಮ ಬಡಪಾಯಿ ಕನ್ನಡಿಗರು ತಮ್ಮ ಯಾವುದೋ ಪುಣ್ಯದ ಫಲದ ಮಹಿಮೆಯಿಂದಲೇನೋ ಮತ್ತೊಮ್ಮೆ ಮತಗಟ್ಟೆಯ ಮುಂದೆ ನಿಂತು ವೋಟ್ ಹಾಕುವ ದುರ್ದಶೆ ಕಳೆದುಕೊಂಡರು...! ರಾಜ್ಯ ಸರ್ಕಾರದ ಬೊಕ್ಕಸವಂತೂ "ಅಯ್ಯೋ ನಾ ಉಳಿದೆ ಮಹದೇವಾ..." ಅಂತ ತನ್ನ ಇಷ್ಟದೇವರಲ್ಲಿ ಮೊರೆಇಟ್ಟಿರಬಹುದು... ನಮ್ಮ ಚುನಾವಣಾ ಕಾರ್ಯಕರ್ತಂತೂ "ಉಸ್ಸಪ್ಪ... ನಾವು ಬದುಕಿದೆವೋ..!" ಅಂತ ನಿಟ್ಟುಸಿರು ಬಿಟ್ಟಿರಬಹುದು...! ಪುಡಾರಿಗಳಂತೂ " ಅಯ್ಯೋ, ಹೋಯ್ತಲ್ಲಯ್ಯ ತಿನ್ನುವ ಚಾನ್ಸ್.." ಅಂತ ಸಿಕ್ಕಪಟ್ಟೆ ಮನದಲ್ಲೇ ಕೊರಗಿರಬಹುದು...!!!

ಅಂತೂ ಬಹಳ "ತಂತ್ರ" - "ಪ್ರತಿತಂತ್ರ" ಗಳ ನಡುವೆ ಸೊರಗಿ ಸಣ್ಣಗಾಗಿರುವ ನಮ್ಮ ಮು.ಮ "ಈಗಿನಿಂದ ನಾವೆಲ್ಲರು ಅಣ್ಣ-ತಮ್ಮಂದಿರಂತೆ ಪಕ್ಷಕ್ಕಾಗಿ ದುಡಿಯುತ್ತೇವೆ" ಅಂತ ಸಾರಲು... ಏಕೋ ಮನದಲ್ಲಿ ಡವ ಡವ...! ಎಕೆಂದರೆ ಎಲ್ಲಿ "ಗಣಿ" ಸ್ಪೋಟ ಸಂಭವಿಸಿ "ಕಮಲ" ಅದರ "ಧೂಳಿ" ನಲ್ಲಿ ಎಲ್ಲಿ ನಲುಗಿಹೋಗಬಹುದೋ ಎಂಬ ಭಯ ನಮ್ಮ ಬಡಪಾಯಿ ಮತಗಾರನನ್ನ ಕಾಡದೆ ಇರುವುದಿಲ್ಲವೇನೋ??? ಎಕೆಂದರೆ ಆ "ಹಮ್ ಸಾತ್ ಸಾತ್ ಹೇ.." ಯ ದೃಶ್ಯವಳಿಯಲ್ಲಿ ಕೆಲವು "ಅತೃಪ್ತ ಮುಖಗಳು" ಕಾಣಿಸಿಕೊಂಡಿದಕ್ಕೆ ಸಾಕ್ಷಿ... ಎಲ್ಲಿ ಆ "ಅತೃಪ್ತ ಮುಖಗಳು" ಮತ್ತೊಂದು ದಿನ ತಮ್ಮ "ದುಂಡಿನೊಡಿಗೆ" ಮತ್ತೆ "ದಿಲ್ಲಿ ಚಲೋ" ಕಾರ್ಯಕ್ರಮ ಶುರುವಚ್ಚಿಕೊಳ್ಳುವರೋ ಆ ದೇವರೇ ಬಲ್ಲ...!

ಭಾರಿ "ಚಿದಂಬರ ರಹಸ್ಯ" ವಾಗಿ ಉಳಿದ "ಆತೃಪ್ತರ" ಓಲೈಸುವ ಕಾರ್ಯ ಏನ್ನೆಲ್ಲಾ ಸ್ವಾಹ: ಮಾಡಿದೆಯೋ ಅದು ಮುಂದಿನ ದಿನಗಳಲ್ಲೇ ಗೊತ್ತಾಗಬೇಕು... ( ಕೆಲವು ಬಂಡಾಯ ಶಾಸಕರಿಗೆ "ಮಂತ್ರಿಗಿರಿಯ" ಕನಸು ಇಷ್ಟರಲ್ಲೇ ಬೀಳಲೂ ಶುರುವಾಗಿರಬಹುದು...!) "ನಾವು ರಾಜ್ಯದ ಜನರಲ್ಲಿ ಕ್ಷಮೆ ಬೇಡುತ್ತೇವೆ.. ನಮ್ಮಿಂದಾದ ತಪ್ಪನ್ನು ಮನ್ನಿಸಿ, ನಾವು ಈಗ ನೆರೆಸಂತ್ರಸ್ತ ಜನರ ನೋವು ಅರಿತು ಅವರಿಗೆ ಸಹಾಯವಿಡಬೇಕು" ಅಂತ ನಮ್ಮ ಮು.ಮ ಅವರು ಹೇಳುತ್ತಿದ್ದಾಗ ಬಹುಶ: ಇದನ್ನು ನಮ್ಮ ನೆರೆಸಂತ್ರಸ್ತ ಜನರು ಟಿ.ವಿ ಯಲ್ಲಿ ನೋಡಿದ್ದರೆ (ಸದ್ಯಕ್ಕೆ ಅವರ ಮನೆ-ಮಠ ಕಳೆದುಕೊಂಡು ತೊಂದರೆಯಲ್ಲಿ ಇರುವಾಗ ಟಿ.ವಿ ನೋಡಿ ಇನ್ನೂ ಮಂಡೆ ಬಿಸಿ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಬಿಡಿ..!) ಇವರು ನಮ್ಮ ಮನೆ ಉದ್ದರಿಸುವುದಕ್ಕಿಂತ ತಮ್ಮ "ಮನೆ" ಯನ್ನು ಉದ್ದರಿಸಿಕೊಳ್ಳುವುದೇ ಒಳಿತು ಎಂದು ಮನದಲ್ಲೇ ಅಂದುಕೊಂಡು ನಿಟ್ಟುಸಿರುಬಿಡಬಹುದು...!

ಕಮಲ ಇಂತಹ ಸಂದರ್ಭದಲ್ಲೇ ಈ ರೀತಿ ನಲುಗಲ್ಪಟ್ಟರೆ ಪಾಪ ತಮ್ಮನ್ನು ವಿಧಾನ ಸಭೆಗೆ ಅರಿಸಿದ ಜನ ಮುಂದೆ ಕರ್ನಾಟಕದಲ್ಲಿ "ಅರಳಲು" ಬಿಡುವರೇ...?, ನಮ್ಮ ಮು.ಮ ಸಲ್ಪ ಮತದಾರರ ಮೇಲೆ ಕರುಣೆ ಇಟ್ಟು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ತ್ವರಿತ ರೀತಿಯಲ್ಲಿ ಮಾಡಿದರೆ ಜನರು ಖುಷ್... ಎಲ್ಲರೂ ಖುಷ್....
ವಿಭಾಗ: edit post
0 Responses

Post a Comment