ವಿನಯ್ ...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೧

ನೆಬ್ರಸ್ಕ ಊರಿನ ರೈತರೊಬ್ಬರು ಆ ಊರಿನಲ್ಲೇ ಪ್ರಸಿದ್ಧ ಬೆಳೆಗಾರರಾಗಿದ್ದರು. ಅವರು ತಮ್ಮ ಹೊಲದಲ್ಲಿ ಬೆಳೆಯುತ್ತಿದ್ದ ಉತ್ತಮ ಬೆಳೆಗೆ ಹಲವು ವರ್ಷಗಳಿಂದ ಪ್ರಶಸ್ತಿ ಸಹ ಬರುತಿತ್ತು.

ಒಮ್ಮೆ ಒಬ್ಬ ಪತ್ರಕರ್ತರು ಅವರ ಬೇಸಾಯದ ಯಶಸ್ಸಿನ ಹಿಂದಿನ ಕಾರಣ ತಿಳಿಯಲು ಸಂದರ್ಶಿಸಿದಾಗ ಒಂದು ಕೂತುಹಲಕಾರಿ ಅಂಶ ಆ ಪತ್ರಕರ್ತರಿಗೆ ತಿಳಿಯಿತು... ಅದೆನೆಂದರೆ ಈ ರೈತರು ತನ್ನ ಅಕ್ಕ ಪಕ್ಕದ ರೈತರೊಡನೆ ಆ ಬೆಳೆಯ ಉತ್ತಮ ಕಾಳುಗಳನ್ನು ಹಂಚಿಕೊಳ್ಳುತ್ತಿದದ್ದು....!

"ನೀವು ನಿಮ್ಮ ಉತ್ತಮ ಕಾಳುಗಳನ್ನು ಅವರೊಡನೆ ಏನೋ ಹಂಚಿಕೊಳ್ಳುತ್ತಿದ್ದೀರಿ, ಆದರೆ ಅವರು ನಿಮ್ಮ ಪ್ರತಿಸ್ಪರ್ಧಿಗಳಾಗಿ ನಿಮ್ಮೆದುರಿಗೆ ಪ್ರತಿ ವರ್ಷ ನಿಲ್ಲುತ್ತಾರಲ್ಲಾ...! ಅದಕ್ಕೆ ನೀವೇನು ಹೇಳುತ್ತೀರಿ...?" ಎಂದು ಆ ಪತ್ರಕರ್ತರು ಕೇಳಲು, ಇವರು:

"ಸರ್, ಅದೇಕೆ ಹಂಗ್ ಹೇಳ್ತಿದ್ದೀರಿ...!, ನಿಮಗೆ ಗೊತ್ತಿಲ್ಲವೇ, ಸಾಮಾನ್ಯವಾಗಿ ತೆನೆ ಬೆಳೆಯುವಾಗ ತನ್ನ ಪರಾಗವನ್ನು ಗಾಳಿಯಲ್ಲಿ ತೇಲಿಬಿಡುತ್ತದೆ. ಅದು ಹೊಲದಿಂದ ಹೊಲಕ್ಕೆ ಹಾರುತ್ತ ತೇಲುತ್ತಿರುತ್ತದೆ. ನನ್ನ ಪಕ್ಕದ ಹೊಲದಲ್ಲಿರುವ ರೈತರು ಕಡಿಮೆ ಗುಣಮಟ್ಟದ ಬೇಜ ನೆಟ್ಟರೆ ಅಲ್ಲಿಂದ ಹಾರಿ ಬರುವ ಪರಾಗವು ನನ್ನ ಫಸಲಿನ ಬೆಳೆಯ ಗುಣಮಟ್ಟವನ್ನ ಕಡಿಮೆ ಮಾಡುವುದಿಲ್ಲವೇ? ಅದಕ್ಕೆ ನಾನು ಉತ್ತಮ ಮಟ್ಟದ ಬೆಳೆ ಬೆಳೆಯಬೇಕೆಂದರೆ ನನ್ನ ಅಕ್ಕ ಪಕ್ಕ ಹೊಲದಲ್ಲಿರುವ ರೈತರು ಸಹ ನನ್ನಂತೆ ಉತ್ತಮ ಬೆಳೆ ಬೆಳೆಯಲೇಬೇಕು..."

... ಆ ರೈತನಿಗೆ ಸಹಜೀವನದ ಮಹತ್ವ ಗೊತ್ತಿತ್ತು. ಅದಕ್ಕೆ ಅವನು ತನ್ನ ಬೆಳೆ ಉತ್ತಮಗೊಳ್ಳಲು ತನ್ನ ಪಕ್ಕದ ಹೊಲದಲ್ಲಿರುವ ಇತರ ರೈತ ಬಾಂಧವರ ಬೆಳೆಯು ಉತ್ತಮಮಟ್ಟದಾಗಿರುಬೇಕು ಎಂದು ಅಶಿಸುತ್ತಿದ್ದನು...

....ಹಾಗೆಯೇ ಅದನ್ನ ನಮ್ಮ ಬಾಳಿಗೆ ಅನ್ವಯಿಸುದಾದರೆ, ನಮ್ಮ ನೆಮ್ಮದಿ/ನಮ್ಮ ಸಂತೋಷ ನಮ್ಮ ನೆರೆ ಹೊರೆಯವರ/ಮಿತ್ರರು-ಬಾಂಧವರ ಜೊತೆಗಿರುವ ಉತ್ತಮ ಬಾಂಧವ್ಯದಲ್ಲಿದೆ. ನಾವು ನಮ್ಮ ಸಂತೋಷಕ್ಕೆ ಎಷ್ಟು ಪ್ರಯತ್ನಪಡುತ್ತೇವೇಯೋ ಅಷ್ಟೇ ನಾವು ಇವರ ನಡುವೆಯೂ ಸಹ ಸಂತಸ ತರಲಿಕ್ಕೆ ಪ್ರಯತ್ನಪಡಲೇಬೇಕು. ಎಕೆಂದರೆ ಜೀವನದ ಮಹತ್ವವೇ ಅದು. ಎಷ್ಟು ದಿನ ನಾವು ಬಾಳಿ ಬದುಕಿದೆವು ಎನ್ನುವುದಕ್ಕಿಂತ ನಮ್ಮ ಜೀವನ ಎಷ್ಟು ಜನರನ್ನು ತಲುಪಿತು ಎಂಬುದರಲ್ಲಿ ಅರ್ಥ ಇದೆ. ನಮ್ಮ ಸಂತೋಷದೊಡನೆ ನಮ್ಮ ಜೊತೆ ಬಾಳುತ್ತಿರುವ ಇತರರ ಸಂತೋಷಕ್ಕೂ ನಾವು ಪ್ರಯತ್ನ ಪಟ್ಟರೆ ಅದಕ್ಕಿಂತ ಉತ್ತಮವಾದ ಕಾರ್ಯ ಯಾವುದಿದೆ ಹೇಳಿ....?


ನೀತಿ ಇಷ್ಟೇ: ನಾವು ಸಂತೋಷದಿಂದಿರಬೇಕೆಂದರೆ ನಾವು ನಮ್ಮ ಪ್ರೀತಿಪಾತ್ರರಲ್ಲೂ ಸಹ ಸಂತೋಷವನ್ನು ಬಯಸಬೇಕು....
ವಿನಯ್ ...
ಹನಿಯಲಿ ಮೂಡಿದೆ ಒಂದು ಕವಿತೆ,

ಚಿಗುರೆಲೆಯ ಮೇಲೆ....

ಮರಿ ಸೂರ್ಯನಂತೆ ಪಳ-ಪಳನೆ ಹೊಳೆಯುತಿದೆ,

ತಾವರೆ ಪುಷ್ಪದ ಮೇಲೆ....

ನಮ್ಮ ಮನೆಯ ಮಗುವಿನ ಮುಗ್ಧ ನಗುವಿನಲ್ಲಿ,

ಸಣ್ಣಗೆ ಅಡಗಿ ಕುಳಿತಿದೆ....

ಅಣ್ಣನ ತುಂಬು ಪ್ರೀತಿಯಲ್ಲಿ,

ನಿಶ್ಕಲ್ಮಶ ವಾಗಿ ಬೆಳಗುತಿದೆ....

ತಂದೆ-ತಾಯಿಯ ಆರೈಕೆಯಲ್ಲಿ,

ತೇಲಿ ಸಾಗುತಿದೆ....

ಗೆಳೆಯರ ಜೀವದ ಗೆಳೆತನದಲ್ಲಿ,

ಬಂಧವಾಗಿ ಕೂಡಿದೆ....

ನಲ್ಲೆಯ ಸವಿ ಪಿಸುಮಾತಿನಲ್ಲಿ,

ಹೃದಯದ ವೀಣೆ ಮೀಟುತಿದೆ....

ಅಂತೂ ಈ ಎಲ್ಲಾ ವಿಶ್ವವೇ,

ಒಂದು ಸುಂದರ ಕವಿತೆಯಂತೆ ಅನಿಸುತಿದೆ....
ವಿನಯ್ ...
ಬರೆಯದೆ ಮೂಡಿದ ಕವಿತೆಯೊಂದು

ಮನದಲ್ಲಿ ಮನೆ ಮಾಡಿ ಕೂತಿದೆ....

ಭಾವನೆಗಳ ತಂತಿ ಮೇಟುತ

ಅಕ್ಷರವಾಗಿ ಹೊರ ಬರಲು ಕಾದಿದೆ....

ಸ್ಪೂರ್ತಿಯ ಸೆಲೆಯೊಂದು ಎದೆಯಾಳದಲ್ಲಿ ಮೊಳೆತು

ಕವನದ ಸಾಲಾಗಿ ಹುಟ್ಟಲು ಹೊರಟಿದೆ....

ನನಗೇನು ತಿಳಿಯದು ನನ ಗೆಳೆಯ.... ನಿನ್ನ ಮಧುರ ಹೊಗುಟ್ಟುವಿಕೆಗೆ ಈ ನನ್ನ ಹೃದಯ ಕಾದಿದೆ....
ವಿನಯ್ ...
ನನ್ನ ಪ್ರೇಯಸಿಗೆ..,

ನಿನ್ನ ಕಣ್ಣಿನಲಿ ಕಾಣುವುದು ಏನಗೆ,
ಆ ಸುಂದರ ಹೊಳಪಿನ ಕಾಂತಿ...
ಕಣ್ಣ್ ಮುಚ್ಚಿ ಕುಳಿತರೂ ಕೂಡ,
ಇದ್ದೇ ಇರುವುದು ನಿನ್ನ ಇರುವಿಕೆಯ ಅನುಭೂತಿ...
ಈ ಇಹಲೋಕದ ಅಷ್ಟೈಶ್ವರ್ಯವೂ ಬೇಡ,
ನಿನ್ನ ನೋಟವೊಂದೇ ಸಾಕು ಏನಗೆ...
ಸದಾ ಇರುವುದು ನನ್ನ ನಿಷ್ಕಲ್ಮಷ ಪ್ರೀತಿ,
ಕೊಂಚವು ಕಮ್ಮಿಯಾಗದೇ ನಿನ್ನೆಡೆಗೆ...

ನಿನ್ನ ದೈವಂಶ ಕಣ್ಣುಗಳ
ಆ ದಿವ್ಯವಾದ ಬೆಳಕು...
ಬೇಡುವುದು ನನ್ನ ಹ್ರದಯ,
ಸದ ತುಂಬಿರಲಿ ಎಂದೆಂದು...
ನೀ ಸ್ಪರ್ಶಿಸು ಎನ್ನ ಕೊನೆಬಾರಿಗೊಮ್ಮೆ,
ವಿನಯ್ ...
ದುಂಬಿಯ ತಳಮಳವು ಹೂವಿಗೇಕೆ ತಿಳಿಯದು,
ದುಂಬಿಯ ತಳಮಳವು ಹೂವಿಗೇಕೆ ತಿಳಿಯದು....?
ಹೂ ತಿಳಿಯದಿದ್ದರೆ ಏನಂತೆ, ಇದ್ದಾನಲ್ಲಾ ಋತುಗಳ ರಾಜ ವಸಂತ,
ನಾವ್ ಅವನಿಗೆ ಹೇಳಿ ಕಳಿಸೋಣ... ದುಂಬಿಯ ಮನದ ಆಸೆ,
-- ಹೇಳಲಿಕ್ಕೆ ಆ ಚಂದದ ಹೂವಿಗೆ....!

ಅರ್ಪಣೆಃ ನನ್ನ ಮಿತ್ರನಿಗೆ
ವಿನಯ್ ...
ಅಂದು ನೀ ಇದ್ದಾಗ ನನ್ ಎದುರಲ್ಲಿ,

ಜೀವನವಾಗಿತ್ತು ಸುಂದರ ಕನಸ್ಸು, ಉಲ್ಲಸದ ಸಾಗರ....

ನನಗೆ ಜೀವನವೆನಿಸುತಿತ್ತು ಧನ್ಯ....

ಅದರೆ ಇಂದು ಹೇಳದೆ ನೀ ಬಿಟ್ಟು ಹೋದ ಮೇಲೆ....

ಎಕೆ ಚೂರಾಗಿದೆ ಒಡೆದು ಮನಸ್ಸು, ಜೀವನವೆಲ್ಲಾ....???
ವಿನಯ್ ...
ಸೀತೆಗೂ ಶಾಕುಂತಲೆಗೂ ಸಿಕ್ಕಿತೇನು

ಪ್ರೀತಿಯಿಂದ??

ಪಡುವಂತಾಯಿತೇ ಇಲ್ಲದ ನೋವಿನ ಉರಿ...

ಪತಿ ರಾಮ - ದ್ಯುಷಂತರು ಏನು ಕಳೆದರು ಇದರಿಂದ?

ಕಳೆದುದು ಎಲ್ಲಾ ಈ ಎರಡು ಹೆಣ್ಣಿಗೆ...

ಪತಿಯ ಮಾತನ್ನು ಮನ್ನಿಸಿ ನೆಡೆದಳು

ಒಬ್ಬಳು,

ಪತಿಯು ಬಿಟ್ಟು ಹೋದ ಪ್ರೇಮದ ನೆನಪಲಿ ಕಾಲವ ಕಳೆದಳು

ಮತ್ತೊಬ್ಬಳು...

ಪತಿಯ ಏಲ್ಲಾ ಕಷ್ಟಗಳಿಗೆ ಹೆಗಲಾದಳು ಒಬ್ಬಳು,

ಪತಿಯ ಪ್ರೇಮಕ್ಕಾಗಿ ಹಾತೊರೆದಳು ಇನ್ನೊಬ್ಬಳು...

ಅಂತು ಕೊನೆ ಬಂದಾಗ, ಒಳಪಟ್ಟರು ಇಬ್ಬರು ಕಾಲದ ಸತ್ವಪರೀಕ್ಷೆಗೆ,

ಪರೀಕ್ಷೆಯೇನೋ ಗೆದ್ದು ಬಂದರು, ಅದರೂ ಏನಾಯಿತು ಇದರಿಂದ ಅವರ ಪತಿದೇವರಿಗೆ!!!

ಒಬ್ಬಳ ಪತಿ ತನ್ನ ಮರೆವನ್ನು ಬಿಟ್ಟು, ಬಂದು ಒಪ್ಪಿದ ಮರಳಿ ಇವಳನ್ನು...

ಅದರೆ... ಮತ್ತೊಬ್ಬಳ ಪತಿ, ಇನ್ನೊಮ್ಮೆ ಇವಳನ್ನು ಬಿಟ್ಟನು... ಹೋಗಲು ಕಾಡಿಗೆ,

ಮತ್ತೊಬ್ಬನ ಇಲ್ಲ-ಸಲ್ಲದ ಮಾತು ಕೇಳಿ....!

ಹೋಗಿ ಸೇರಿದಳೊಬ್ಬಳು ತನ್ನ ಪತಿಯ ತೋಳ ತಕ್ಕೆಯಲ್ಲಿ,

ಮತ್ತೊಬ್ಬಳು ಸೇರಿದಳು ಬೇಸರಹೊಂದಿ ತನ್ನ ತಾಯಿ ಭೂದೇವಿಯ ಒಡಲಿನಲ್ಲಿ...

ಹೀಗೆ ಕೊನೆಯಾಯಿತು ಇಬ್ಬರ ಕಥೆ,

ಒಬ್ಬಳಿಗೆ ದಕ್ಕಿತು ಪ್ರೇಮ...,

ಮತ್ತೊಬ್ಬಳಿಗೆ ದಕ್ಕಿ, ನಂತರ ಇಲ್ಲದೆ ದೊರವಾಯಿತು ಪ್ರೇಮ...!
ವಿನಯ್ ...
ಮನಸ್ಸೆಂಬ ಕೊಳದಲ್ಲಿ ಬಿದ್ದಿದೆ,

ಒಂದು ಸಣ್ಣ ಹನಿ...!

ಆ ಹನಿಯೆಂಬುದು ಸಂಶಯ, ಖುಷಿ, ಅಳು, ನಗು ಎಂಬ ಚಿಕ್ಕ ಹನಿ...!

ಹನಿ ಎಷ್ಟೇ ಗಾತ್ರವಿದ್ದರೂ ಸರಿ,

ಬಿದ್ದ ಕೊಳದಲಿ ಮೂಡದೆ ಬಿಡದು ಅಲೆಗಳ ಸುರಳಿ...

ಸುರಳಿ ಅದಷ್ಟು ದೊಡ್ಡದು,

ಕಲಕುವುದು ಕೊಳದ ನೀರು ಹೆಚ್ಚು-ಹೆಚ್ಚು!

ಹಾಗೇ ನಮ್ಮ ಮನದ ಕೊಳದಲಿ ಬಿದ್ದರೆ ದುಃಖದ/ಕಷ್ಟದ ಹನಿ...

ಆಗ ಏಳುವವವು ನೋವಿನ ಬ್ರುಹತ್ ಅಲೆಗಳು ಏತ್ತರದಿ ಏರಿ..ಏರಿ.!

ಇಲ್ಲದೆ ಕೊರಗುವುದು ಈ ಮನಸ್ಸು...ಸಲ್ಲದ ನೋವಿನ ದುಗದಿಯಲಿ.

ಆದರೂ...

ಎಂದಾದರೂ ಇರದಿರುವುದೇ ಈ ಬಾಳಿನಲ್ಲಿ ಸವಿ ಕ್ಷಣದ ಸಿಹಿ...

ಕೆಲವೇ ಹನಿ ಬಿದ್ದರೂ ಸಾಕು...

ಅದು ಮಾಡುವುದು ಮನಸ್ಸನ್ನ ತಿಳಿ-ತಿಳಿ....
ವಿನಯ್ ...
ಬರೆದೆ ನಾನು ಒಂದು ಕವಿತೆ,

ನನ್ನ ಹುಡುಗಿಯ ಹೆಸರಿಗೆ...!

ಹೆಸರೆನೆಂದು ತಲೆಗೆ ತಿಳಿಯದೆ,

ಬರೆದೆ ಅವಳ ಮನಸ್ಸಿಗೆ...

ಅವಳ ಮನಸ್ಸಿನ ಭಾವವಾ ಅರಿಯದೆ,

ಬರೆದೆ ಅವಳ ಕಣ್ಣಿಗೆ...

ಅವಳ ಕಣ್ಣನ ದೋಷವ ತಿಳಿದು,

ಬರೆದೆ ಅವಳ ರೂಪಕೆ...

ಅವಳ ರೂಪ ಕಪ್ಪೆಂದು ಅರಿತು,

ಬರೆದೆ ಅವಳ ನಗುವಿಗೆ...

ಅವಳ ನಗು ಬಹಳ ಜುಗ್ಗವೆಂದು ನೆನೆದು,

ಬರೆಯಲು ಹೊರಟೆ, ತಲೆಕೆರೆದು ಯೋಚಿಸುತ ಮತ್ತೊಂದಿಗೆ...!!!

**************

ಹೇಗೆ ಬರೆದು, ಒಡೆದು, ಇನ್ನೊಮ್ಮೆ ಬರೆದು ಹಾಕಿದ ಸಾಲುಗಳೇ ಆಯ್ತು ಹಲವಾರು...!

ನಂತರ ಪತ್ರದ ರೂಪವೇ ಚೆನ್ನಿಲ್ಲವೆಂದು ತಿಳಿದು,

ಹರಿದು ಹಾಕಿ, ಮಾಡಿದೆ ಅದನ.... ಕಸದ ಬುಟ್ಟಿಯ ಪಾಲು....!!!
ವಿನಯ್ ...
ಪಾತರಗತ್ತಿಯು ಹಾರುತಿದೆ,

ಹೂವಿಂದ ಹೂವಿನ ಮೇಲೆ.........

ಬೀಸುತ ರೆಕ್ಕೆಯ, ಕಾಣುತ ಪುಷ್ಪವ,

ಸವಿಯಲು ಮಕರಂದವ ಅದು ಹೊರಟಿದೆ....

ಹೂವು ಯಾವುದಾದರೇನು, ಅದಕೆ ಬೇಕು ಕೇವಲ ಮಕರಂದ,

ಹಾಗೇ ಹೂವಿಗೆ ಕೇವಲ ಸಾಕು ಪತರಗತ್ತಿ ತರುವ ಪರಾಗದ ಸವಿಮಿಲನದ ಅನುಬಂಧ....

ಅಂತು ಒಂದು ಪಾತರ, ಮತ್ತೊಂದು ಹೊವಿನ ಮಧ್ಯ ಇದೆ..,

ಕಾಣದ ಒಂದು ಮಧುರ ಮಿಲನ,

ತಾವಿಬ್ಬರು ಸ್ರುಷ್ಟಿಯಲ್ಲಿ ಬೇರೆ-ಬೇರೆಯಾದರು ಸಹ,

ಒಬ್ಬರ ಬಿಟ್ಟರೆ ಇನ್ನೊಬ್ಬರಿಗಿರದು ಜೀವನ....
ವಿನಯ್ ...
ಬೆಳೆದ ಮಗನೊಬ್ಬನು

ತನ್ನ ಅಮ್ಮನಿಗೆ ಪತ್ರ ಬರೆದು ಕೇಳಲು...:

ನಾ ಮಾಡಿದೆ ಆ ಕೆಲಸ,

ಅದಕಷ್ಟು ರುಪಾಯಿ...

ನಾ ಮಾಡಿದೆ ಈ ಕೆಲಸ,

ಅದಕಿಷ್ಟು ರುಪಾಯಿ...

ನಾ ತಂದೆ ಆ ಕಾಯಿ,

ಅದಕಷ್ಟು ರುಪಾಯಿ...

ನಾ ತಂದೆ ಈ ವಸ್ತು,

ಅದಕ್ಕಾಯಿತಿಷ್ಟು ರುಪಾಯಿ...

ಹೇಳು ನೀ ಕಳಿಸಿ ಕೊಡುವೆಯಾ ನನಗೆ ರುಪಾಯಿ...?

.............................

ಅದಕ್ಕೆ ಬರೆದಳು ಅಮ್ಮ ಉತ್ತರ....:

ನಿನ್ನ ಹೊತ್ತಾ ಆ ಒಂಬತ್ತು ತಿಂಗಳಿಗೆ ಕೊಡುವೆಯಾ ರುಪಾಯಿ...?

ನಿನ್ನ ಸೌಕ್ಯಕೋಸ್ಕರ ದೇವರ ಬೇಡಿದನಲ್ಲಾ,

ಕೊಡುವೆಯಾ ಅದಕೆ ರುಪಾಯಿ...?

ನಿನ್ನ ಏಲ್ಲಾ ಕಷ್ಟಗಳಿಗೆ ಸ್ಪಂದಿಸಿದೆನ್ನಲ್ಲಾ... ಕೊಡುವೆಯಾ

ಅದಕೆ ರುಪಾಯಿ...?

ಊಟ - ಬಟ್ಟೆ, ನಿನಗೊಂದು ಅಸ್ತಿತ್ವ ಕೊಟ್ಟನಲ್ಲಾ,

ಕೊಡುವೆಯಾ ಅದಕೆ ರುಪಾಯಿ...?

ಅದೆಲ್ಲ ಬಿಡು, ನನ್ನ ಅಷ್ಟು ಪ್ರೀತಿಗೆ ಸರಿಯಾಗಿ ಕಟ್ಟಲು ಸಾಧ್Yಅವೇ ನಿನಗೆ ರುಪಾಯಿ...!!!

..............................

ಓದಿ ಮುಗಿಸಿದ ಮಗನಿಗೆ ತಿಳಿಯಿತು ಒಂದು ನಿಜ ಉತ್ತರ...

ಹೋಗಿ ಕಣ್ಣೇರು ಹರಿಸುತಾ ಹೇಳಿದ ಅವನು ಈ ತರಾ...

"ನಿನ್ನ ತುಂಬು ಪ್ರೀತಿಯ ಕಾಣದ ಈ ಕುರುಡು ಕಣ್ಣನ ಕ್ಷಮಿಸು,

ನಾ ಮಾಡಿದ ತಪ್ಪನಾ.... "

ಬೇಸರ ಪಡದೆ ಕ್ಷಮಿಸು ನನ್ನ,

ಓ ನನ್ನ ಮುದ್ದಿನ ಅಮ್ಮ, ನಿನ್ನ ಪ್ರೀತಿ ಇರಲಿ...

ನನ್ನ ಮೇಲೆ ಸದಾ ನಿರಂತರ...