ವಿನಯ್ ...
ಸೀತೆಗೂ ಶಾಕುಂತಲೆಗೂ ಸಿಕ್ಕಿತೇನು

ಪ್ರೀತಿಯಿಂದ??

ಪಡುವಂತಾಯಿತೇ ಇಲ್ಲದ ನೋವಿನ ಉರಿ...

ಪತಿ ರಾಮ - ದ್ಯುಷಂತರು ಏನು ಕಳೆದರು ಇದರಿಂದ?

ಕಳೆದುದು ಎಲ್ಲಾ ಈ ಎರಡು ಹೆಣ್ಣಿಗೆ...

ಪತಿಯ ಮಾತನ್ನು ಮನ್ನಿಸಿ ನೆಡೆದಳು

ಒಬ್ಬಳು,

ಪತಿಯು ಬಿಟ್ಟು ಹೋದ ಪ್ರೇಮದ ನೆನಪಲಿ ಕಾಲವ ಕಳೆದಳು

ಮತ್ತೊಬ್ಬಳು...

ಪತಿಯ ಏಲ್ಲಾ ಕಷ್ಟಗಳಿಗೆ ಹೆಗಲಾದಳು ಒಬ್ಬಳು,

ಪತಿಯ ಪ್ರೇಮಕ್ಕಾಗಿ ಹಾತೊರೆದಳು ಇನ್ನೊಬ್ಬಳು...

ಅಂತು ಕೊನೆ ಬಂದಾಗ, ಒಳಪಟ್ಟರು ಇಬ್ಬರು ಕಾಲದ ಸತ್ವಪರೀಕ್ಷೆಗೆ,

ಪರೀಕ್ಷೆಯೇನೋ ಗೆದ್ದು ಬಂದರು, ಅದರೂ ಏನಾಯಿತು ಇದರಿಂದ ಅವರ ಪತಿದೇವರಿಗೆ!!!

ಒಬ್ಬಳ ಪತಿ ತನ್ನ ಮರೆವನ್ನು ಬಿಟ್ಟು, ಬಂದು ಒಪ್ಪಿದ ಮರಳಿ ಇವಳನ್ನು...

ಅದರೆ... ಮತ್ತೊಬ್ಬಳ ಪತಿ, ಇನ್ನೊಮ್ಮೆ ಇವಳನ್ನು ಬಿಟ್ಟನು... ಹೋಗಲು ಕಾಡಿಗೆ,

ಮತ್ತೊಬ್ಬನ ಇಲ್ಲ-ಸಲ್ಲದ ಮಾತು ಕೇಳಿ....!

ಹೋಗಿ ಸೇರಿದಳೊಬ್ಬಳು ತನ್ನ ಪತಿಯ ತೋಳ ತಕ್ಕೆಯಲ್ಲಿ,

ಮತ್ತೊಬ್ಬಳು ಸೇರಿದಳು ಬೇಸರಹೊಂದಿ ತನ್ನ ತಾಯಿ ಭೂದೇವಿಯ ಒಡಲಿನಲ್ಲಿ...

ಹೀಗೆ ಕೊನೆಯಾಯಿತು ಇಬ್ಬರ ಕಥೆ,

ಒಬ್ಬಳಿಗೆ ದಕ್ಕಿತು ಪ್ರೇಮ...,

ಮತ್ತೊಬ್ಬಳಿಗೆ ದಕ್ಕಿ, ನಂತರ ಇಲ್ಲದೆ ದೊರವಾಯಿತು ಪ್ರೇಮ...!
ವಿಭಾಗ: edit post
0 Responses

Post a Comment