ವಿನಯ್ ...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೧

ನೆಬ್ರಸ್ಕ ಊರಿನ ರೈತರೊಬ್ಬರು ಆ ಊರಿನಲ್ಲೇ ಪ್ರಸಿದ್ಧ ಬೆಳೆಗಾರರಾಗಿದ್ದರು. ಅವರು ತಮ್ಮ ಹೊಲದಲ್ಲಿ ಬೆಳೆಯುತ್ತಿದ್ದ ಉತ್ತಮ ಬೆಳೆಗೆ ಹಲವು ವರ್ಷಗಳಿಂದ ಪ್ರಶಸ್ತಿ ಸಹ ಬರುತಿತ್ತು.

ಒಮ್ಮೆ ಒಬ್ಬ ಪತ್ರಕರ್ತರು ಅವರ ಬೇಸಾಯದ ಯಶಸ್ಸಿನ ಹಿಂದಿನ ಕಾರಣ ತಿಳಿಯಲು ಸಂದರ್ಶಿಸಿದಾಗ ಒಂದು ಕೂತುಹಲಕಾರಿ ಅಂಶ ಆ ಪತ್ರಕರ್ತರಿಗೆ ತಿಳಿಯಿತು... ಅದೆನೆಂದರೆ ಈ ರೈತರು ತನ್ನ ಅಕ್ಕ ಪಕ್ಕದ ರೈತರೊಡನೆ ಆ ಬೆಳೆಯ ಉತ್ತಮ ಕಾಳುಗಳನ್ನು ಹಂಚಿಕೊಳ್ಳುತ್ತಿದದ್ದು....!

"ನೀವು ನಿಮ್ಮ ಉತ್ತಮ ಕಾಳುಗಳನ್ನು ಅವರೊಡನೆ ಏನೋ ಹಂಚಿಕೊಳ್ಳುತ್ತಿದ್ದೀರಿ, ಆದರೆ ಅವರು ನಿಮ್ಮ ಪ್ರತಿಸ್ಪರ್ಧಿಗಳಾಗಿ ನಿಮ್ಮೆದುರಿಗೆ ಪ್ರತಿ ವರ್ಷ ನಿಲ್ಲುತ್ತಾರಲ್ಲಾ...! ಅದಕ್ಕೆ ನೀವೇನು ಹೇಳುತ್ತೀರಿ...?" ಎಂದು ಆ ಪತ್ರಕರ್ತರು ಕೇಳಲು, ಇವರು:

"ಸರ್, ಅದೇಕೆ ಹಂಗ್ ಹೇಳ್ತಿದ್ದೀರಿ...!, ನಿಮಗೆ ಗೊತ್ತಿಲ್ಲವೇ, ಸಾಮಾನ್ಯವಾಗಿ ತೆನೆ ಬೆಳೆಯುವಾಗ ತನ್ನ ಪರಾಗವನ್ನು ಗಾಳಿಯಲ್ಲಿ ತೇಲಿಬಿಡುತ್ತದೆ. ಅದು ಹೊಲದಿಂದ ಹೊಲಕ್ಕೆ ಹಾರುತ್ತ ತೇಲುತ್ತಿರುತ್ತದೆ. ನನ್ನ ಪಕ್ಕದ ಹೊಲದಲ್ಲಿರುವ ರೈತರು ಕಡಿಮೆ ಗುಣಮಟ್ಟದ ಬೇಜ ನೆಟ್ಟರೆ ಅಲ್ಲಿಂದ ಹಾರಿ ಬರುವ ಪರಾಗವು ನನ್ನ ಫಸಲಿನ ಬೆಳೆಯ ಗುಣಮಟ್ಟವನ್ನ ಕಡಿಮೆ ಮಾಡುವುದಿಲ್ಲವೇ? ಅದಕ್ಕೆ ನಾನು ಉತ್ತಮ ಮಟ್ಟದ ಬೆಳೆ ಬೆಳೆಯಬೇಕೆಂದರೆ ನನ್ನ ಅಕ್ಕ ಪಕ್ಕ ಹೊಲದಲ್ಲಿರುವ ರೈತರು ಸಹ ನನ್ನಂತೆ ಉತ್ತಮ ಬೆಳೆ ಬೆಳೆಯಲೇಬೇಕು..."

... ಆ ರೈತನಿಗೆ ಸಹಜೀವನದ ಮಹತ್ವ ಗೊತ್ತಿತ್ತು. ಅದಕ್ಕೆ ಅವನು ತನ್ನ ಬೆಳೆ ಉತ್ತಮಗೊಳ್ಳಲು ತನ್ನ ಪಕ್ಕದ ಹೊಲದಲ್ಲಿರುವ ಇತರ ರೈತ ಬಾಂಧವರ ಬೆಳೆಯು ಉತ್ತಮಮಟ್ಟದಾಗಿರುಬೇಕು ಎಂದು ಅಶಿಸುತ್ತಿದ್ದನು...

....ಹಾಗೆಯೇ ಅದನ್ನ ನಮ್ಮ ಬಾಳಿಗೆ ಅನ್ವಯಿಸುದಾದರೆ, ನಮ್ಮ ನೆಮ್ಮದಿ/ನಮ್ಮ ಸಂತೋಷ ನಮ್ಮ ನೆರೆ ಹೊರೆಯವರ/ಮಿತ್ರರು-ಬಾಂಧವರ ಜೊತೆಗಿರುವ ಉತ್ತಮ ಬಾಂಧವ್ಯದಲ್ಲಿದೆ. ನಾವು ನಮ್ಮ ಸಂತೋಷಕ್ಕೆ ಎಷ್ಟು ಪ್ರಯತ್ನಪಡುತ್ತೇವೇಯೋ ಅಷ್ಟೇ ನಾವು ಇವರ ನಡುವೆಯೂ ಸಹ ಸಂತಸ ತರಲಿಕ್ಕೆ ಪ್ರಯತ್ನಪಡಲೇಬೇಕು. ಎಕೆಂದರೆ ಜೀವನದ ಮಹತ್ವವೇ ಅದು. ಎಷ್ಟು ದಿನ ನಾವು ಬಾಳಿ ಬದುಕಿದೆವು ಎನ್ನುವುದಕ್ಕಿಂತ ನಮ್ಮ ಜೀವನ ಎಷ್ಟು ಜನರನ್ನು ತಲುಪಿತು ಎಂಬುದರಲ್ಲಿ ಅರ್ಥ ಇದೆ. ನಮ್ಮ ಸಂತೋಷದೊಡನೆ ನಮ್ಮ ಜೊತೆ ಬಾಳುತ್ತಿರುವ ಇತರರ ಸಂತೋಷಕ್ಕೂ ನಾವು ಪ್ರಯತ್ನ ಪಟ್ಟರೆ ಅದಕ್ಕಿಂತ ಉತ್ತಮವಾದ ಕಾರ್ಯ ಯಾವುದಿದೆ ಹೇಳಿ....?


ನೀತಿ ಇಷ್ಟೇ: ನಾವು ಸಂತೋಷದಿಂದಿರಬೇಕೆಂದರೆ ನಾವು ನಮ್ಮ ಪ್ರೀತಿಪಾತ್ರರಲ್ಲೂ ಸಹ ಸಂತೋಷವನ್ನು ಬಯಸಬೇಕು....
ವಿಭಾಗ: edit post
0 Responses

Post a Comment