ವಿನಯ್ ...
ಭಾರತ ಹಲವು ಸಂಸ್ಕೃತಿಗಳ ನೆಲೆವೀಡು... ಹಲವು ವೈವಿಧ್ಯಗಳ ಸಂಗಮ.... ಜಗತ್ತಿನ ಹಲವು ಪ್ರಾಚೀನ ಸಂಸ್ಕೃತಿಗಳಲ್ಲಿ ಶ್ರೇಷ್ಠವಾದದ್ದು ಭಾರತೀಯ ಸಂಸ್ಕೃತಿ. ಈ ಪುಣ್ಯಭೂಮಿಯಲ್ಲಿ ಆಚರಿಸುವ ಉತ್ಸವಗಳು ಅನೇಕ. ಇದರಲ್ಲಿ ಆನಾದಿಕಾಲದಿಂದ ಆಚರಣೆಯಲ್ಲಿರುವ/ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಕುಂಭ ಮೇಳವೂ ಒಂದು...



ಬಹುಶ: ಲಕ್ಷಾಂತರ ಜನರು ಸೇರುವ... ಎಲ್ಲರೊಳು ಒಂದಾಗಿ ನದಿಯಲ್ಲಿ ಪುಣ್ಯಸ್ನಾನಗೈಯುವ ಉತ್ಸವ ಜಗತ್ತಿನಲ್ಲಿ ಇದೊಂದೇ ಇರಬಹುದು ಅನಿಸುತ್ತದೆ. ನಾಗ ಬಾಬಾ, ಸಾಧು-ಸಂತರು, ಮಂತ್ರ ಪಠಿಸುವ ಪುರೋಹಿತರು, ಯೋಗಿಗಳು, ವಿದೇಶಿಯರು, ಬಡವ-ಶ್ರೀಮಂತರು...., ಹು: ಯಾರಾರು ಬೇಕು ಹೇಳಿ..... ಎಲ್ಲರ ಗಮನ "ಮೋಕ್ಷ ಸಾಧನೆ" ಗಾಗಿ... ಬಹುಜನ್ಮದ ಬಂಧನದಿಂದ ಮುಕ್ತಿಗಾಗಿ...

ನದಿ ಮೂಲಗಳು ನಮ್ಮ ಸಂಸ್ಕೃತಿಯಲ್ಲಿ ಬಹಳ ಮಹತ್ವ ಸ್ಥಾನ ಪಡೆದಿವೆ... ಎಲ್ಲರ ಜೀವನಾಡಿಯಾಗಿರುವುದಲ್ಲದೇ ಜನರ ಪಾಪ ತೊಳೆಯುವ ಪಾಪನಾಶಿಣಿಗಳಾಗಿಯೂ ಅವುಗಳ ಅಸ್ತಿತ್ವವಿದೆ.... ಜನರ ಅಸ್ತಿಕತನ, ನಂಬಿಕೆ, ಭಕ್ತಿ-ಭಾವಗಳು ಸಹ ಇದರಲ್ಲಿ ಸೇರಿಕೊಂಡಿವೆ. ನೀರು ಹೇಗೆ ಜೀವಸತ್ವವೋ, ಹಾಗೆಯೇ ನಮ್ಮ ಜನಕ್ಕೆ ಸರ್ವವೂ ಸಹ..., ಅದಕ್ಕೆ ನೀರಿಗೆ ಪಂಚಸತ್ವಗಳಲ್ಲಿ ಬಹಳ ಮುಖ್ಯಸ್ಥಾನವಿದೆ.

ನಮ್ಮ ಭಾರತ ಪುಣ್ಯಭೂಮಿಯಲ್ಲಿ ಇರುವ ಹಲವು ನದಿಗಳಲ್ಲಿ ಗಂಗಾ ನದಿಗೆ ನದಿಗಳಲ್ಲೇ ಶ್ರೇಷ್ಟ ಸ್ಥಾನ. ಅಜನ್ಮ ಪಾಪನಾಶಿನಿ ಗಂಗೆಯ ಮಹಿಮೆಯ ಬಗ್ಗೆ ಆನಾದಿ ಕಾಲದಿಂದಲೂ, ಹಲುವು ವೇದಗಳ ಬರಹಗಳಲ್ಲೂ ಉಲ್ಲೇಖವಿದೆ. ಈ ತಾಯಿ ಎಲ್ಲೆಲ್ಲಿ ಹರಿದಳೋ ಅಲ್ಲೆಲ್ಲಾ ಪುಣ್ಯಸ್ಥಾನಗಳ ಉಗಮವಾಗಿದೆ... ಅಸ್ತಿಕ ಭಕ್ತರಿಗೆ ಮುಕ್ತಿಯ ತಾಣವಾಗಿವೆ....

ಕುಂಭ ಮೇಳದ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ: ಪಾಪಗಳನು ತೊಳೆದು, ಜನ್ಮ ಬಂಧನಗಳಿಂದ ಮುಕ್ತಿಪಡೆಯುವ "ಪುಣ್ಯ ಮೇಳ"...

ಏನಿದು "ಕುಂಭ ಮೇಳ"...?

ಕುಂಭ -- ಸಂಸ್ಕೃತದಲ್ಲಿ ಕಳಶಕ್ಕೆ ಹೋಲಿಸಲಾಗುತ್ತದೆ. ನಮ್ಮ ಜೋತಿಷ್ಯ ಶಾಸ್ತ್ರದಲ್ಲಿ ಕುಂಭ/ಕಳಶವು ಕುಂಭ ರಾಶಿಗೆ ಸಂಬಂಧಿಸಿದೆ. ಅದಕ್ಕೆ ಏನೋ ಈ ರಾಶಿಯಲ್ಲಿನ ಗ್ರಹಗಳ ಸಂಯೋಗದಲ್ಲೇ ಈ ಉತ್ಸವ ಬರುವುದರಿಂದ "ಕುಂಭ ಮೇಳ" ಎಂಬ ಹೆಸರು ಬಂದಿರುವುದು.

ಸಮುದ್ರಮಥನ ನೆಡೆದು ಅಮೃತ ಪ್ರಪ್ತಿಯಾದಾಗ ದೇವತೆಗಳು-ರಾಕ್ಷಸರ ನಡುವ ಆ ಅಮೃತ ಪಡೆಯಲು ಭೀಕರ ಯುದ್ಧವೇ ನೆಡೆದಿತ್ತು. ಆದು ೧೨ ದಿನ ಮತ್ತು ೧೨ ರಾತ್ರಿಗಳವರೆಗೂ ವಿಸ್ತರಿಸಿತ್ತು... ( ಮನುಷ್ಯ ಜನ್ಮದ ೧೨ ವರ್ಷಕ್ಕೆ ಇವು ಸಮ). ಆ ಸಮಯದಲ್ಲಿ ಅಮೃತ ಕಳಶವನ್ನು ಹೊತ್ತ ದೇವತೆಗಳು ಅದನ್ನು ರಾಕ್ಷಸರ ಹಿಡಿತದಿಂದ ಉಳಿಸಲು ಹೊತ್ತೊಯುತ್ತಿದ್ದಾಗ ಆ ಕಳಶದಿಂದ ಕುಲುಕಿದ ಹಲವು ಅಮೃತದ ಬಿಂದುಗಳು ಪ್ರಯಾಗ, ಹರಿದ್ವಾರ, ಉಜ್ಜೈನಿ ಮತ್ತು ನಾಸಿಕ್ ಎಂಬ ಕ್ಷೇತ್ರಗಳಲ್ಲಿ ಬಿದ್ದವೆಂದು ಪ್ರತೀತಿ. ಈ ನಾಲ್ಕು ಕ್ಷೇತ್ರಗಳಲ್ಲೇ ಈಗ ಕುಂಭ ಮೇಳ ನೆಡೆಯುವುದು...

ನಾಗ ಬಾಬಗಳು:


"ಕುಂಭ ಮೇಳ" ಪ್ರಮುಖರೆಂದೇ ಹೇಳಲ್ಪಡುವ, ಸಾಧುಗಳಲ್ಲೇ ಬಹಳ ಕೋಪಿಷ್ಟರು, ಭಯಂಕರ ರೂಪದವರು ಮತ್ತು ಆಕ್ರಮಣಶಾಲಿಗಳು. ಯಾವಗಲೂ ತಪ ಸಾಧನಗಳಲ್ಲೇ ತಮ್ಮ ಜೀವನ ಕಳೆಯುವ ಇವರು "ಕುಂಭ ಮೇಳ" ಹೊತ್ತಿಗೆ ಜಾಗೃತರಾಗಿ, ತಮ್ಮ ಆವಾಸಸ್ಥಾನವಾದ ಗುಹೆ, ಬೆಟ್ಟಗಳಿಂದ ಹೊರಬಂದು ನದಿಯಲ್ಲಿ ಪ್ರಥಮರಾಗಿ ಪುಣ್ಯಸ್ನಾನಗೈಯುತ್ತಾರೆ. ಸದಾ ನಗ್ನರಾಗಿರುವ, ದೇಹದ ತುಂಬಾ ಅಗ್ನಿಕುಂಡದ/ಚಿತಾಬಸ್ಮದ ಲೇಪನ ಮಾಡಿಕೊಂಡಿರುವ ಇವರು ಶಿವ ಸಾಕ್ಷಾತ್ಕಾರಕ್ಕಾಗಿ ತಮ್ಮ ಜೀವನ ಮುಡಿಪಿಡುವವರು. ಇವರ ಸ್ನಾನದ ನಂತರವೇ ಇತರರ ಪುಣ್ಯಸ್ನಾನ ನೆಡೆಯುವುದು ಇಲ್ಲಿಯವರೆಗಿನ ವಾಡಿಕೆ.



"ಕುಂಭ ಮೇಳ" ನಡೆಯುವ ಸಮಯ:


ಕುಂಭ ರಾಶಿಯಲ್ಲಿ ಗುರು ಗ್ರಹದ ಪ್ರವೇಶವಾದಾಗ ಮತ್ತು ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ "ಕುಂಭ ಮೇಳ" ಘಟಿಸುತ್ತದೆ. ಈ ಸಂಯೋಗ ಎಲ್ಲಾ ವರ್ಷಗಳಲ್ಲೂ ಘಟಿಸುವುದಿಲ್ಲ. ಇದರ ಸಂಯೋಗ ಪುಣ್ಯನದಿಗಳ ನೀರನ್ನು ಅಮೃತವಷ್ಟೇ ಪುಣ್ಯವನ್ನಾಗಿ ಮಾಡುವ ಶಕ್ತಿ ಹೊಂದಿವೆ.


ಸ್ಥಳ ಮತ್ತು ಗ್ರಹ ಕೂಟ ಸಂಯೋಗ:

ಗುರು ಗ್ರಹ, ಸೂರ್ಯ, ಚಂದ್ರಗಳ ಸಮ್ಮಿಲನದಲ್ಲಿ "ಕುಂಭ ಮೇಳ" ಈ ಸ್ಥಳಗಲ್ಲಿ ನೆಡೆಯುತ್ತವೆ:

ಹರಿದ್ವಾರ: ಕುಂಭ, ಮೇಷ, ಧನು

ಪ್ರಯಾಗ: ವೃಷಭ, ವೃಶ್ಚಿಕ.

ನಾಸಿಕ್: ಸಿಂಹ, ಕರ್ಕಾಟಕ

ಉಜ್ಜೈನಿ: ಸಿಂಹ, ಮೇಷ


"ಶಾಹಿ ಸ್ನಾನ" ನೆಡೆಯುವ ದಿನಗಳು:


೧೪ ಜನವರಿ ೨೦೧೦: ಮಕರ ಸಂಕ್ರಾಂತಿ

೧೫ ಜನವರಿ ೨೦೧೦: ಮೌನಿ ಅಮಾವಾಸ್ಯೆ ಮತ್ತು ಸೂರ್ಯ ಗ್ರಹಣದ ದಿನ

೨೦ ಜನವರಿ ೨೦೧೦: ವಸಂತ ಪಂಚಮಿ

೩೦ ಜನವರಿ ೨೦೧೦: ಮಾಘ ಪೂರ್ಣಿಮೆಯ ದಿನ

೧೨ ಮತ್ತು ೧೩ ಫೆಬ್ರವರಿ ೨೦೧೦: ಮಹಾಶಿವರಾತ್ರಿ ಯಂದು

೧೫ ಮಾರ್ಚ್: ಸೋಮವತಿ ಅಮಾವಾಸ್ಯ

೨೪ ಮಾರ್ಚ್: ರಾಮ ನವಮಿಯ ದಿನ

೩೦ ಮಾರ್ಚ್: ಚೈತ್ರ ಪೂರ್ಣಿಮೆಯ ದಿನ

೧೪ ಎಪ್ರಿಲ್: ಅಮಾವಾಸ್ಯ - ಕೃಷ್ಣ ಪಕ್ಷ

೨೮ ಎಪ್ರಿಲ್: ವೈಶಾಖ ಪೂರ್ಣಿಮೆಯ ದಿನ

ಇದರಲ್ಲಿ ೧೨-೧೩ ಫೆಬ್ರವರಿ, ೧೫ ಮಾರ್ಚ್, ೧೪ ಮತ್ತು ೨೮ ಎಪ್ರಿಲ್ ಮುಖ್ಯ ಸ್ನಾನದ ದಿನಗಳು...


ಓದುಗರೆ, ನಿಮ್ಮಲ್ಲಿ ಆನೇಕರು ಈ ಮಹಮೇಳದಲ್ಲಿ ಭಾಗವಹಿಸಲು ಈ ಸ್ಥಳಗಳಿಗೆ ಹೋಗಬಹುದು... ನಿಮ್ಮೆಲ್ಲರ ಪಯಣ ಸುಖಕರವಾಗಿರಲಿ ಎಂದು ಬಯಸುವೆ
ವಿಭಾಗ: edit post
0 Responses

Post a Comment