ವಿನಯ್ ...
ಐದನೆ ವರ್ಷಕ್ಕೆ ಅವನ ಕಿವಿ ಮಂದವಾಗತೊಡಗಿದವು...,

ಒಂಬತ್ತನೆ ವರ್ಷಕ್ಕೆ ಪೂರ್ತಿ ಕಿವುಡು....!

ಬಾಲಕನ ತಂದೆ-ತಾಯಿ ಇಬ್ಬರು ಅನಕ್ಷರಸ್ಥರು... ತಮ್ಮ ಮಗನಿಗೆ ಏನೂ ಮಾಡಲು ಆಗದ ಪರಿಸ್ಥಿತಿ.. ಬಾಲಕನ ಅತ್ಮಸ್ಥೈರ್ಯ ಮಾತ್ರ ಮಂಡಿಉರಲಿಲ್ಲ. ಐದು ಕಿ.ಮಿ. ದೂರದ ಶಾಲೆಯಲ್ಲಿ ಪ್ರಾಥಮಿಕ ವಿದ್ಯಭ್ಯಾಸ, ಅದೂ ಅತ್ಯುತ್ತಮ ಅಂಕಗಳೊಂದಿಗೆ ರಾಜ್ಯ ಮಂಡಳಿಯ ೭ನೇ ತರಗತಿ ಪರೀಕ್ಷೆಯಲ್ಲಿ ಐದನೇ ರಾಂಕ್. ಇನ್ನೂ ಶ್ರಮಪಟ್ಟು ಓದಿ ೧೨ನೇ ತರಗತಿಯಲ್ಲಿ ರಾಜ್ಯಕ್ಕೆ ೭ನೇ ರಾಂಕ್....

ಕಾಲೇಜಿನ ೨ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅರ್.ಪಿ.ಎಸ್.ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿ ಕ್ಲೆರ್ಕ್-ಕಮ್-ಟೈಪಿಸ್ಟ್ ಹುದ್ದೆ ಪಡೆದು ತನ್ನ ವಿದ್ಯಭ್ಯಾಸದ ಜೊತೆಗೆ ಕೆಲಸವನ್ನು ಮಾಡಿ ಫೊಲಿಟಿಕಲ್ ಸೈನ್ಸ್ ನಲ್ಲಿ ವಿಶ್ವವಿದ್ಯಾಲಕ್ಕೆ ಪ್ರಥಮ ಸ್ಥಾನ... ಮುಂದೆ ಎನ್.ಇ.ಟಿ ಪರೀಕ್ಷೆಯಲ್ಲೂ ತೇರ್ಗಡೆ....

ಪಿ.ಎಚ್.ಡಿ ಮಾಡುವ ಸಂದರ್ಭದಲ್ಲೂ ಎಮ್.ಫಿಲ್ ಮತ್ತು ಎಮ್.ಎ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕಾರ್ಯ... ಅರ್.ಎ.ಎಸ್ ನಲ್ಲಿ ಕಾರ್ಯನಿರ್ವಹಿಸುತ್ತಲೇ ಯು.ಪಿ.ಎಸ್.ಸಿ ಗೆ ಪ್ರಯತ್ನ...

೧೫ ವರ್ಷಗಳ ನಿರಂತರ ಹೋರಾಟ.., ಎಲ್ಲಾ ಅಡೆತಡೆಗಳನ್ನು ಮೀರಿ ಕೊನೆಗೂ ಸಂದಿತು ಜಯ....

ಮಣಿರಾಮ್...

ಮಣಿರಾಮ್ ಶರ್ಮ...

ಇದೇ ಗುರುವಾರ, ತಾ: ೮-೧೦-೨೦೦೯ ರಂದು ತಮ್ಮನ್ನು ರಾಷ್ಟ್ರ ಸೇವೆಗೆ ಸೇರಿಸಿಕೊಳ್ಳಲಾಗಿದೆ ಎಂಬ ವರ್ತಮಾನ ತಿಳಿದಾಗ ಅದು ಅವರೊಬ್ಬರಿಗೆ ಸಿಕ್ಕ ಜಯವಾಗಿರಲಿಲ್ಲ... ಅದು ಇಡೀ ಅಂಗವಿಕಲ ಕುಲಕ್ಕೆ ಸಂದ ಜಯ ಸಹ ಅಗಿತ್ತು... ತಮ್ಮಂತಹವರನ್ನು ಸರ್ಕಾರದ ಅತ್ಯುನ್ನತ ಸೇವೆಗಳಲ್ಲಿ ಸೇರುವ ಅವಕಾಶದಿಂದ ವಿನಾ: ಕಾರಣ ದೂರ ಇಟ್ಟಿದಕ್ಕೆ/ತಡೆದಕ್ಕೆ ಸಂದ ಜಯ...

ಪತ್ರಿಕೆಗಳಲ್ಲಿ ನಿರಂತರ ಸುದ್ಧಿಯಾಗುತ್ತಿದ್ದರೂ ಕಾಣದ ಕಾರಣಗಳಿಂದ ಅವರ ಹೆಸರು ಅಯ್ಕೆ ಪ್ರಕ್ರಿಯೆಯಲ್ಲಿ ಬರುತ್ತಿರಲಿಲ್ಲ. ಇದಕ್ಕೆ ಮೂಲ ಕಾರಣ... ಅವರ ಕಿವುಡುತನ...!

ಎಲ್ಲಾ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೂ ಇದೇ ವರ್ಷದ ಆಗಸ್ಟ್ ತಿಂಗಳ ಮಧ್ಯ ವಾರದಲ್ಲಿ ಕರೆ ಬಂದಿದ್ದರೆ, ಮಣಿರಾಮ್ ಶರ್ಮ ರವರಿಗೆ ಸೆಪ್ಟೆಂಬರನಲ್ಲಿ ಈ ಸಂತಸದ ಸುದ್ಧಿ ಬಂದಾಗ ಇನ್ನೂ ಸುಮಾರು ೧ ತಿಂಗಳ ವರೆಗೂ ನೀವು ಅಪ್ಪೊಇಂಟ್ಮೆನ್ಟ್ ಗೆ ಕಾಯಬೇಕು ಎಂಬ ಕಹಿ ಸತ್ಯ... ಅದರೂ ಮಣಿರಾಮ್ ಇದರಿಂದ ನಿರಾಶರಾಗಿಲ್ಲ.

೧೯೯೫ ರಲ್ಲೇ ಅವರ ಐ.ಎ.ಎಸ್ ಪಯಣ ಪ್ರಾರಂಭವಾದರೂ, ಸೀಟ್ ಅಲಾಟ್ಮೆಂಟ್ ಅಗದಿರಲು ಒಂದೇ ಕಾರಣ... ಅವರ ಅಂಗವಿಕಲತೆಃ ಕಿವುಡುತನ... ಭಾಗಶ: ಕಿವುಡುತನ ಇದ್ದವರಿಗೆ ಮಾತ್ರ ಅವಕಾಶ ಇತ್ತೇ ಹೊರತು ಇವರಂತೆ ಪೂರ್ಣ ಕಿವುಡುತನ ಇದ್ದವರಿಗೆ ಅಲ್ಲಿ ಪ್ರಮುಖ್ಯತೆ ಇರಲಿಲ್ಲ..

ಅಂತೂ ಸುಮಾರು ೭.೫ ಲಕ್ಷ ರೂ. ವೆಚ್ಚದ ಶಸ್ತ್ರಚಿಕಿತ್ಸೆಯ ಸಹಾಯದಿಂದ ಅವರ ಕಿವಿಗಳು ಭಾಗಶ: ಕೇಳತೊಡಗಿದಾಗ ಇದರ ಸಹಾಯದಿಂದಲೇ ಅವರು ಒರಲ್ ಪ್ರಶ್ನೆ-ಉತ್ತರಗಳ ಸಂದರ್ಶನ ಎದುರಿಸಿದರು.

ಕೊನೆಗೂ ಜಯ ದಕ್ಕಿಸಿಕೊಂಡಿರುವ ಮಣಿರಾಮ್ ಶರ್ಮರವರು ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಸ್ಫೂರ್ತಿಯ ಸೆಲೆಯಾಗುತ್ತಾರೆ. ಅವರ ನಿಶ್ಚಲವಾದ ಪ್ರಯತ್ನದ ಫಲವೇ ಇಂದು ಅವರ ಐ.ಎ.ಎಸ್ ನಲ್ಲಿ ಇಂತಹ ಮಹತ್ತರವಾದ ಸಾಧನೆ ಮಾಡಲು ಸಾಧ್ಯವಾಗಿದ್ದು. ಸಾಧನೆ ಎಲ್ಲರಿಂದಲೂ ಸಾಧ್ಯ ಎಂಬುದೇ ನಾವು ಶರ್ಮರವರಿಂದ ಕಲಿಯಬೇಕಾದ ಸಾರಂಶ... ದೈಹಿಕ ವಿಕಲತೆ ಇದ್ದರೂ ತಮ್ಮ ಅತ್ಮಬಲದಿಂದಲೇ ಮಹತ್ಕಾರ್ಯಗಳಲ್ಲಿ ವಿಜಯಿಸುವ ಬಲ ಮಣಿರಾಮ್ ಶರ್ಮರವರಿಗೆ ಇರಬೇಕಾದರೆ ನಾವೇಕೆ ಹಿಂದುಳಿಯಬೇಕು...?

ಅದಕ್ಕೆ ಹೇಳುವುದಲ್ಲವೇ - "ಕೈ ಕೆಸರಾದರೆ ಬಾಯಿ ಮೊಸರು" ಅಂತ...
ವಿಭಾಗ: edit post
2 Responses
  1. Unknown Says:

    Hi dear Vinay!!!!!

    Glad to see your article again......

    Simply i was typing "manadamaatugalu" then in google i found your blog dear????/ Where were you these days???? NO memail???? How is life ........ Once again Nice article dear.... Really iam missing u r articles!


    Always you frined....
    Kavya


  2. Thank you very much Kavya...:)


Post a Comment